Skip to content
ಸಂಜೆ ಪ್ರಭ

ಸಂಜೆ ಪ್ರಭ

June 18, 2026
Primary Menu
  • ರಾಜ್ಯ
    • ರಾಜಕೀಯ
    • ಬೆಂಗಳೂರು
  • ಕರಾವಳಿ
    • ಮಂಗಳೂರು
    • ಉಡುಪಿ
  • ರಾಷ್ಟ್ರೀಯ
    • ಜಗತ್ತು
    • ವಿದೇಶ
  • ವ್ಯಾಪಾರ
  • ತಂತ್ರಜ್ಞಾನ ಸುದ್ದಿ
  • ಕ್ರೀಡೆ
    • ಕ್ರಿಕೆಟ್
    • ಫುಟ್ಬಾಲ್
  • ಜೀವನ ಶೈಲಿ
    • ಫ್ಯಾಷನ್
  • ಪ್ರಯಾಣ
  • ಸಿನಿಮಾ
Light/Dark Button
  • ರಾಷ್ಟ್ರೀಯ

ಭಾರತದಲ್ಲಿ ಒಲಿಂಪಿಕ್ ಆಂದೋಲನಕ್ಕೆ ಉತ್ತೇಜನ ನೀಡಿರುವ ನೀತಾ ಅಂಬಾನಿಗೆಐಒಸಿ ಶ್ಲಾಘನೆ

ಸಂಜೆ ಪ್ರಭ March 9, 2026
WhatsApp Image 2026-03-07 at 6.49.04 PM
ಶೇರ್ ಮಾಡಿ:

ಸಂಜೆ ಪ್ರಭ ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತನ್ನ ವೆಬ್‌ಸೈಟ್‌ನಲ್ಲಿ ಒಲಿಂಪಿಕ್ ಮೌಲ್ಯಗಳನ್ನು ಉತ್ತೇಜಿಸಲು ಪ್ರಪಂಚದಾದ್ಯಂತದ ಮಹಿಳೆಯರ ಪ್ರಯತ್ನಗಳನ್ನು ಎತ್ತಿ ತೋರಿಸುವ ವಿಶೇಷ ಲೇಖನವನ್ನು ಪ್ರಕಟಿಸಿದೆ. ರಿಲಯನ್ಸ್ ಫೌಂಡೇಷನ್ ಸಹಯೋಗದೊಂದಿಗೆ ಭಾರತದಲ್ಲಿ ನಡೆಸುತ್ತಿರುವ ಕಾರ್ಯಕ್ರಮವನ್ನು ಲೇಖನವು ಪ್ರಮುಖ ಉದಾಹರಣೆಯಾಗಿ ಎತ್ತಿ ತೋರಿಸುತ್ತದೆ.


ಆ ಲೇಖನದ ಪ್ರಕಾರ, ಒಲಿಂಪಿಕ್ ಮೌಲ್ಯಗಳ ಶಿಕ್ಷಣ ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ಕ್ರೀಡಾ ಮನೋಭಾವ, ಗೌರವ, ನ್ಯಾಯಸಮ್ಮತತೆ ಮತ್ತು ತಂಡದ ಕೆಲಸದಂತಹ (ಟೀಮ್ ವರ್ಕ್) ಮೌಲ್ಯಗಳನ್ನು ತುಂಬುವ ಅಭಿಯಾನವು ಭಾರತದಲ್ಲಿ ವೇಗವಾಗಿ ಪ್ರಗತಿಯಲ್ಲಿದೆ. 2024ರಿಂದ ಕಾರ್ಯಕ್ರಮವು ದೇಶಾದ್ಯಂತ 65,000ಕ್ಕೂ ಹೆಚ್ಚು ಶಾಲೆಗಳಲ್ಲಿ ಸುಮಾರು 1.2 ಕೋಟಿ ಮಕ್ಕಳನ್ನು ತಲುಪಿದೆ.
ಐಒಸಿ ಮತ್ತು ರಿಲಯನ್ಸ್ ಫೌಂಡೇಷನ್‌ ಬೆಂಬಲದೊಂದಿಗೆ ಈ ಉಪಕ್ರಮವು ಈಗ ಗ್ರಾಮೀಣ ಮತ್ತು ಕಡಿಮೆ ಆದಾಯದ ಸಮುದಾಯಗಳ ಅಂಗನವಾಡಿ ಕೇಂದ್ರಗಳನ್ನು ತಲುಪಿದೆ. ದೇಶಾದ್ಯಂತ 120 ಅಂಗನವಾಡಿ ಕೇಂದ್ರಗಳ ಮಹಿಳೆಯರು ಇಲ್ಲಿಯವರೆಗೆ 1,200ಕ್ಕೂ ಹೆಚ್ಚು ಒವಿಇಪಿ ಸೆಷನ್ ಗಳನ್ನು ನಡೆಸಿದ್ದಾರೆ. ಕ್ರೀಡೆಗಳು ಮತ್ತು ಮೌಲ್ಯಾಧಾರಿತ ಚಟುವಟಿಕೆಗಳು ಮಕ್ಕಳಲ್ಲಿ, ವಿಶೇಷವಾಗಿ ಹುಡುಗಿಯರಲ್ಲಿ ಆತ್ಮ ವಿಶ್ವಾಸ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಲು ಮ

ಧ್ಯಪ್ರದೇಶದ ಅಂಗನವಾಡಿ ಕೇಂದ್ರದ ವಿದ್ಯಾರ್ಥಿನಿ ರುಚಿಯ ಉದಾಹರಣೆಯನ್ನು ಲೇಖನವು ಉಲ್ಲೇಖಿಸುತ್ತದೆ.
ಭಾರತದಲ್ಲಿ ಒಲಿಂಪಿಕ್ ಆಂದೋಲನವನ್ನು ಉತ್ತೇಜಿಸುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಗಮನಾರ್ಹವಾಗಿದೆ. ಅವರು ರಿಲಯನ್ಸ್ ಫೌಂಡೇಷನ್‌ನ ಅಧ್ಯಕ್ಷೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಸಮಾಜದ ವಿಶಾಲ ವರ್ಗಕ್ಕೆ ಕ್ರೀಡೆ ಮತ್ತು ಒಲಿಂಪಿಕ್ ಮೌಲ್ಯಗಳನ್ನು ಉತ್ತೇಜಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಐಒಸಿ ಲೇಖನವು ಸೌದಿ ಅರೇಬಿಯಾ, ಸೆನೆಗಲ್ ಮತ್ತು ಇಟಲಿಯಲ್ಲಿನ ಉಪಕ್ರಮಗಳನ್ನು ಸಹ ಉಲ್ಲೇಖಿಸುತ್ತದೆ. ಅಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೂಲಕ ಶಿಕ್ಷಣ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯಲ್ಲಿ ಒಲಿಂಪಿಕ್ ಮೌಲ್ಯಗಳನ್ನು ಸಂಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ.

ಶೇರ್ ಮಾಡಿ:

Post navigation

Previous: “ರಣಬಾಲಿ”ಯಲ್ಲಿ ರಶ್ಮಿಕಾ-ವಿಜಯ್ ರೋಮ್ಯಾನ್ಸ್
Next: ಎಐ ಯುಗ ಎಂಬುದು ಕೇವಲ ಅಪ್‌ಗ್ರೇಡ್ ಅಲ್ಲ, ಇಡೀ ಆರ್ಥಿಕತೆಯ ಮರುಹೊಂದಿಕೆ

ಫಾಲೌ ಮಾಡಿ

  • ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್
  • ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ
  • ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ
  • ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ
  • ಕೋಟ ಶ್ರೀನಿವಾಸ ಪೂಜಾರಿಯವರಿಂದ ಕರಾವಳಿ ಜಂಕ್ಷನ್ ನಿಂದ ಕಲ್ಮಾಡಿವರೆಗೆ ರಸ್ತೆ ಕಾಮಗಾರಿ ವೀಕ್ಷಣೆ

ಹಳೆಯ ಸುದ್ದಿ

WhatsApp Image 2026-03-09 at 12.51.01 AM
  • ಬೆಂಗಳೂರು

ಪರಿಸರ ಉಳಿಸುವುದು ನಮ್ಮ ಕರ್ತವ್ಯ- ರೇವತಿ ಕಾಮತ್

ಸಂಜೆ ಪ್ರಭ March 9, 2026
WhatsApp Image 2026-03-09 at 12.39.13 AM
  • ಬೆಂಗಳೂರು

ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯದಿದ್ದರೆ ಉಪವಾಸ ಸತ್ಯಾಗ್ರಹ-ಸ್ಥಳೀಯ ನಿವಾಸಿಗಳ ಆಕ್ರೋಶ

ಸಂಜೆ ಪ್ರಭ March 9, 2026
WhatsApp Image 2026-03-09 at 12.31.28 AM
  • ಉಡುಪಿ

ಉಡುಪಿ ಮಲಬಾರ್ ಗೋಲ್ದ್ ನಲ್ಲಿ ಮಹಿಳಾ ದಿನಾಚರಣೆ – ಸಾಧಕರಿಗೆ ಸನ್ಮಾನ

ಸಂಜೆ ಪ್ರಭ March 9, 2026
WhatsApp Image 2026-03-08 at 9.36.29 AM
  • ಉಡುಪಿ

ಎಂ.ಜಿ.ಎಂ. ಸಂಧ್ಯಾ ಕಾಲೇಜಿನಲ್ಲಿ ಐಟಿ ಕ್ಲಬ್ ಚಟುವಟಿಕೆಗಳ ಉದ್ಘಾಟನೆ

ಸಂಜೆ ಪ್ರಭ March 9, 2026
  • Facebook
  • X
  • YouTube
  • Instagram

Contact Us | About Us | Privacy Policy | Terms of Use

Address: Venkatesh Pai
No. 2068, 8th Main
‘E’ Block, Rajaji Nagar II Stage,
Bangalore – 560010
Karnataka
Email: sanjeprabha@gmail.com
Phone No: +91 98864 96677

[gigatech_copy_rights] | ReviewNews by AF themes.